
ಶ್ರೀರಾಮ, ಸೀತಾದೇವಿ, ಲಕ್ಷ್ಮಣ, ಹನುಮಂತ
ಶ್ರೀ ಕ್ಷೇತ್ರ ಹೊರಕೆರೆದೇವರಪುರ ದಲ್ಲಿ ಶ್ರೀರಾಮನ ಪ್ರತಿಷ್ಟಾಪನ ದೇವಾಲಯವಿದ್ದು ಈ ದೇವಾಲಯದಲ್ಲೂ ಕೂಡ ದಿನನಿತ್ಯ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ಹಾಗು ದೇವಾಲಯದಲ್ಲಿ ಪ್ರತಿ ಶನಿವಾರದಂದು ಭಜನೆ ನಡೆಯುತ್ತದೆ ಹಾಗು ಗ್ರಾಮದ ಭಕ್ತಾದಿಗಳು ಕೂಡ ಸ್ವಾಮಿಯನ್ನು ಮನೆಗೆ ಕರೆತಂದು ಭಜನೆ ಮಾಡಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಯುಗಾದಿಹಬ್ಬದಿಂದ ಬರುವ ಶ್ರೀರಾಮನವಮಿಯವರೆಗೆ 9 ದಿನಗಳ ಕಾಲ ಸ್ವಾಮಿಯು ಗ್ರಾಮದ ಎಲ್ಲಾ ದೇವಾಲಯಗಳಿಗೂ ಪ್ರತಿನಿತ್ಯ ಪ್ರದಕ್ಷಿಣೆ ಹಾಕಿಕೊಂಡು ಬರುತ್ತದೆ, ಶ್ರೀರಾಮನವಮಿಯಂದು ವಿಶೇಷವಾದ ಪೂಜೆಗಳು ನಡೆಯುತ್ತವೆ. ಶ್ರೀರಾಮನವಮಿಯಂದು ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಪಾನಕ, ಕೊಸಂಬರಿ ನೀಡಲಾಗುತ್ತದೆ ಹಾಗು ಬಂದ ಭಕ್ತಾಧಿಗಳಿಗೂ.. ಗ್ರಾಮದ ಎಲ್ಲಾ ಜನಕ್ಕು ದೇವಾಂಗ ಸಮಾಜದ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಗುತ್ತದೆ.
ಪ್ರತಿವರ್ಷ ದೇವಾಂಗ ಸಮಾಜದ ವತಿಯಿಂದ ಶ್ರೀರಾಮ ಮಂದಿರದಲ್ಲಿ ಗೌರಿ ಮತ್ತು ಗಣೇಶನನ್ನು ಕೂರಿಸಲಾಗುತ್ತದೆ. ಈ ಪದ್ಧತಿಯು ಸುಮಾರು 50 ವರ್ಷದಿಂದ ನಡೆದುಕೊಂಡು ಬಂದಿದೆ. ಶ್ರೀರಾಮ ದೇವಾಲಯದಲ್ಲಿ ಭವ್ಯವಾದ ಮಂಟಪವನ್ನು ನಿರ್ಮಿಸಿ ಅದ್ಧೂರಿ ಅಲಂಕಾರದೊಂದಿಗೆ ಗೌರಮ್ಮ ಮತ್ತು ಗಣೇಶನನ್ನು 9 ಅಥವಾ 11 ದಿನಗಳ ಕಾಲ ಕೂರಿಸಿ ವಿಶೇಷವಾದ ಪೂಜೆಗಳು ಮಾಡಲಾಗುತ್ತದೆ. ಗೌರಿ ಗಣೇಶವಿರುವ ಆ 9 ದಿನಗಳಲ್ಲಿ ಪ್ರತಿನಿತ್ಯವು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ ಹಾಗು ವಿರಾಠಪರ್ವ (ಭಾರತ ಪುರಾಣ) ಹೇಳಲಾಗುತ್ತದೆ, ದಿನನಿತ್ಯ ಭಕ್ತಾದಿಗಳಿಂದ ಪೂಜೆಗಳು ಗೌರಮ್ಮನಿಗೆ ಬಾಗಿಣ ನಿಡುವ ಮೂಲಕ ಪೂಜೆಯನ್ನು ಸಲ್ಲಿಸುತ್ತಾರೆ.
ಗಣೇಶನ ವಿಸರ್ಜನೆಯ ವೇಳೆ ಅದ್ದೂರಿ ಅಲಂಕಾರ ಮಾಡಿ ಗ್ರಾಮದ ಬೇದಿಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ, ಮೆರವಣಿಗೆ ವೇಳೆಯಲ್ಲಿ ಗೊಂಬೆಕುಣಿತ, ಡೋಳುಕುಣಿತದ ಜೊತೆ ಅನೇಕ ವಿಶೇಷ ವೇಷ ಭೂಷಣಗಳನ್ನು ತೊಟ್ಟು ಬೇದಿಬೀದಿಗಳಲ್ಲಿ ಕುಣಿದು ಸಂತೋಷ ಪಡುತ್ತಾರೆ, ಈ ಮೆರವಣಿಯು ಗ್ರಾಮದ ಕಲ್ಯಾಣಿಯವರೆಗೂ ಸಾಗುತ್ತದೆ. ಕಲ್ಯಾಣಿ ಬಳಿ ಬಂದ ಮೇಲೆ ಗೌರಮ್ಮ ಮತ್ತು ಗಣೇಶನ ಮೇಲಿನ ಹಾರಗಳನ್ನು ಹರಾಜುಮಾಡಲಾಗುತ್ತದೆ ಭಕ್ತಾದಿಗಳು ಆ ಹಾರಗಳನ್ನು ಹರಾಜಿನಮೂಲಕ ಕರಿದಿಸುತ್ತಾರೆ ನಂತರ ಅಲ್ಲಿ ನೆರೆದಿಂದ ಭಕ್ತಾದಿಗಳಿಗೆ ಪ್ರಸಾದ ವನ್ನು ನೀಡಲಾಗುತ್ತದೆ ನಂತರ ಗಣೇಶನನ್ನು ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಇದು ಪ್ರತಿವರ್ಷವು ನಡೆದು ಕೊಂಡು ಬಂದಿದೆ.
ನೀವು ನೋಡುತಿರುವ ದೃಶ್ಯ 2009 ರಲ್ಲಿ ಕೂರಿಸಲಾದ ಗೌರಮ್ಮ ಮತ್ತು ಗಣೇಶ ಹಬ್ಬದ ಫೋಟೋ
***